ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್ (೧೮೪೬-೧೯೨೬) ಜರ್ಮನಿಯಲ್ಲಿ ತತ್ವಶಾಸ್ತ್ರಜ್ಞರಾಗಿದ್ದ, ೧೯೦೯ರ ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ವಿಜೇತರು. ಮೊದಮೊದಲು 'ನೋಬೆಲ್ ಪಾರಿತೋಷಕ ನಿರ್ಧಾರಣ ಸಮಿತಿ' ಗೆ ಪ್ರಶಸ್ತಿ ನಿರ್ಧಾರಕ್ಕೆ ಸ್ಪಷ್ಟವಾದ ಮಾರ್ಗದರ್ಶೀ ಸೂತ್ರಗಳ ಅಭಾವದಿಂದ, ಈ ತರಹದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಯಿತು. == ಜನನ == ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್ ಔರಿಚ್ ನಲ್ಲಿ ಜನಿಸಿದರು. 'ಗಾಟಿಂಗೆನ್' ಹಾಗೂ 'ಬರ್ಲಿನ್ ವಿಶ್ವವಿದ್ಯಾಲಯ,' ಗಳಲ್ಲಿ ತತ್ವಶಾಸ್ತ್ರದ ಅಧ್ಯಯನವನ್ನು ಮುಗಿಸಿ, ಕೆಲಕಾಲ ಶಾಲಾಶಿಕ್ಷಕರಾಗಿ ದುಡಿದರು. ಮುಂದೆ ಸ್ವಿಟ್ಝರ್ ಲೆಂಡ್ ನ 'ಬಾಸೆಲ್ ವಿಶ್ವವಿದ್ಯಾಲಯ' ದಲ್ಲಿ ತತ್ವಶಾಸ್ತ್ರದ ಅಧ್ಯಾಪಕರಾಗಿ ನೇಮಿತಿಯಾದರು. ಅವರ ಲೇಖನಿಯಿಂದ 'ತತ್ವಶಾಸ್ತ್ರ' ದ ಹಲವಾರು ಉದ್ಗ್ರಂಥಗಳು ಹೊರಬಂದಿವೆ. ಅವುಗಳ ವಿವರಗಳು ಹೀಗಿವೆ. ' , ' (1890) ' (1896) ' (1908) ಆಗಿನ ಕಾಲದಲ್ಲೇ ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್ , ಇಂಗ್ಲೆಂಡ್ ಮತ್ತು ಅಮೆರಿಕಾದೇಶಗಳಲ್ಲಿ ತಮ್ಮ ವ್ಯಾಖ್ಯಾನಗಳನ್ನು ನೀಡಿದ್ದರು. == ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್ ರವರ ತಾತ್ವಿಕ ನಿಲವು, ಚಿಂತನೆ ಹೀಗಿದೆ == ಪ್ರಕೃತಿ ಹಾಗೂ ಚೈತನ್ಯದ ನಡುವಿನ ಮನುಷ್ಯನ ಅಸ್ತಿತ್ವದಲ್ಲಿದೆ. ಅವನಿಗೊಂದು 'ಆತ್ಮ' ವಿರುವುದೇ ಅದಕ್ಕೆ ಪುರಾವೆ. ಮನುಷ್ಯರು ಶುದ್ಧ ಚೈತನ್ಯ ಸ್ವರೂಪಿಗಳಾಗಲು ಪ್ರಯತ್ನಿಸಬೇಕು. ಪ್ರಾಕೃತಿಕವಾದ ಲಕ್ಷಣಗಳನ್ನು ಮೀರಲು ಪ್ರಯತ್ನಿಸುವುದೇ ಜೀವಾತ್ಮನ ಗುರಿ. ಇಷ್ಟೆಲ್ಲಾ ತತ್ವಶಾಸ್ತ್ರದ ವಿಶೇಷ ಅಧ್ಯಯನಶೀಲರಾಗಿದ್ದ, 'ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್'ರಿಗೆ ' ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ' ಸಿಕ್ಕಿರುವುದು, ಆಶ್ಚರ್ಯಕರವಾಗಿದೆ.